
ಹು-ಧಾ ಮಹಾನಗರ ಪಾಲಿಕೆಯ ನಂ.43 ವಾರ್ಡನ ಜನ ಸೇವಕನಾಗಲು ಮುಂದೆ ಬಂದ ಯುವ ನಾಯಕ ಪ್ರವೀಣ ಮೋಹನಲಾಲ ಸುತಾರ-Yuva-Nayaka-Jana-Sevaka-Praveen-mohanalaal
Friday, August 20, 2021
1 Comment
ಪ್ರವೀಣ ಮೋಹನಲಾಲ ಸುತಾರ ರವರನ್ನು ಹು-ಧಾ ಮಹಾನಗರ ಪಾಲಿಕೆ ವಾರ್ಡ ನಂ. 43ರಸಾಮಾನ್ಯ ಕ್ಷೇತ್ರಕ್ಕೆ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶಕ್ಕೆ ಮನವಿ*
ಪ್ರವೀಣ ತಂದೆ ಮೋಹನಲಾಲ ಸುತಾರ ಸಾ|| ಮನೆ
ನಂ.17 ಹೇಮಂತ ನಗರ, ಕುಸುಗಲ್ಲ ರೋಡ, ಕೇಶ್ವಾಪುರ, ಹುಬ್ಬಳ್ಳಿ - 580023
ಇವರು ಕಳೆದ 7 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ. ಪ್ರವೀಣ ಮೋಹನಲಾಲ ಸುತಾರರು ಹು.ಧಾ.ಮ.ಪಾಲಿಕೆ, ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್, ಜಿಲ್ಲಾ
ಪಂಚಾಯತ, ತಾಲೂಕ ಪಂಚಾಯತಿ, ಎ.ಪಿ.ಎಂ.ಸಿ, ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷದವತಿಯಿಂದ ಅತ್ಯಂತ ನಿಷ್ಟೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.
ಈಗ ಸಧ್ಯ ಇವರಿಗೆ ಪಕ್ಷವು ವಹಿಸಿಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣೀಕವಾಗಿ ನಿರ್ವಹಿಸುತ್ತಾ ಬಂದು ಪಕ್ಷವನ್ನು ಸಂಘಟಿಸುತ್ತಾ ಹಾಗೂ ಪಕ್ಷದ ಅನೇಕ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಮೊನ್ನೆ ನಡೆದ ಲೋಕಸಭಾ, ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷದ ಕಾರ್ಯಕರ್ತರನ್ನು ಬಿ.ಜೆ.ಪಿ.ಗೆ ಸೇರ್ಪಡೆಗೊಳಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದ ಇವರಿಗೆ
ಮಾನ್ಯರು ಈ ಮನವಿಯನ್ನು ಪರಿಗಣಿಸಿ ಇನ್ನು ಹೆಚ್ಚಿನ ಸಮಾಜದ ಹಾಗೂ ಪಕ್ಷದ ಸೇವೆ, ವಾರ್ಡಿನ ಜನ ಸೇವೆ ಮಾಡಲು ಸಾಮಾನ್ಯ ಕ್ಷೇತ್ರದಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕಾಗಿ ಈ ಮೂಲಕ ಸಾರ್ವಜನಿಕರು ಮನವಿ ಮಾಡಿದ್ದಾರೆ,ಹಾಗೂ ಪ್ರವೀಣ ಮೋಹನಲಾಲ ಸುತಾರ ರವರು ಮತ್ತೊಮ್ಮೆ ಕಳಕಳಿಯಿಂದ ಜನರಲ್ಲಿ ಮತ್ತು ಮಾನ್ಯರಲ್ಲಿ ವಿನಂತಿಯನ್ನು ಮಾಡಿಕೊಂಡಿದ್ದಾರೆ.
ವರದಿ:
ರಘು ನರಗುಂದ
ಧಾರವಾಡ
Congratulations bhai .. best of luck . We .all .of..with you..💕👍
ReplyDelete